ಡಾ. ರಾಜ್ ಕುಮಾರ್ ಅವರ ಮೇರುವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ
Kemmannu News Network, 24-04-2025 17:38:41
ಉಡುಪಿ, ಏಪ್ರಿಲ್ 24 : ವರನಟ ಡಾ. ರಾಜ್ ಕುಮಾರ್ ಅವರ ಮೇರುವ್ಯಕ್ತಿತ್ವ, ಕನ್ನಡಾಭಿಮಾನ, ಭಾಷಾಪ್ರೇಮ ಹಾಗೂ ಸಮಾಜಮುಖಿ ಕಾರ್ಯಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ಇಂದು ನಗರದ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವರನಟ ಡಾ.ರಾಜ್ ಕುಮಾರ್ ರವರ 97 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಡಾ. ರಾಜ್ ಕುಮಾರ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಸಹ ರಾಜಕೀಯದಲ್ಲಿ ಭಾಗವಹಿಸದೇ, ಚಿತ್ರರಂಗ ಎಂಬ ಒಂದೇ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು, ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪೂರ್ಣ ಪರಿಶ್ರಮ ವಹಿಸಿ, ಯಶಸ್ಸು ಸಾಧಿಸಿದ್ದಾರೆ. ಅದೇ ನಿಟ್ಟಿನಲ್ಲಿ ಯುವಪೀಳಿಗೆಯು ಸಹ ಜೀನವದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡುವುದುರೊಂದಿಗೆ ಕುಟುಂಬಕ್ಕೆ, ಸಮಾಜಕ್ಕೆ, ಸುತ್ತಮುತ್ತಲಿನ ಪರಿಸರಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
ಜೀವನವೇ ಒಂದು ನಾಟಕವಿದ್ದಂತೆ. ಅದರಲ್ಲಿ ನಾವು ಕಲಾವಿದರುಗಳು. ಜೀವನದ ನಾಟಕದಲ್ಲಿ ನಮ್ಮ ನಮ್ಮ ಪಾತ್ರಗಳನ್ನು ಮುಂದಾಳತ್ವ ವಹಿಸಿ, ಉತ್ತಮವಾಗಿ ನಿರ್ವಹಿಸಿದಾಗ ಮಾತ್ರ ಸುಂದರ ಭವಿಷ್ಯ ಕಟ್ಟಿಕೊಳ್ಳು ಸಾಧ್ಯ. ಈ ನಿಟ್ಟಿನಲ್ಲಿ ಯುವಪೀಳಿಗೆ ಹೆಜ್ಜೆ ಇಡಬೇಕು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ರಾಜ್ ಕುಮಾರ್ ಅವರು, ಕನ್ನಡ ಚಿತ್ರರಂಗದಲ್ಲಿ ಸುಮಾರು 5 ದಶಕಗಳ ಕಾಲ ನಟನೆಯನ್ನು ಮಾಡಿದ್ದು, 220 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದವರಲ್ಲಿ ಇವರ ಕೊಡುಗೆ ಅಪಾರವಾಗಿದೆ ಎಂದರು.
1942 ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಬಾಲ ನಟರಾಗಿ ನಟಿಸುವ ಮೂಲಕ ವೃತ್ತಿ ಆರಂಭಿಸಿದ ಇವರ ಬಹುತೇಕ ಚಲನಚಿತ್ರಗಳು ಸಮಾಜದಲ್ಲಿ ಸುಧಾರಣೆ ತರುವಂತಹ ಸಂದೇಶಗಳನ್ನು ಸಾರಿವೆ. ಇವರು ಕೇವಲ ನಟರಲ್ಲದೇ ಗಾಯಕರೂ ಆಗಿದ್ದು, ಚಲನಚಿತ್ರಗೀತೆಗಳು ಹಾಗೂ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಭಾರತ ಸರ್ಕಾರ ಕೊಡಮಾಡುವ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ನಟಿಸಿದ ಬಂಗಾರದ ಮನುಷ್ಯ ಚಲನಚಿತ್ರವು ಸುಮಾರು ಎರಡು ವರ್ಷಗಳ ಕಾಲ ಬೆಳ್ಳಿ ಪರದೆಯ ಮೇಲೆ ನಿರಂತರವಾಗಿ ಮೂಡಿಬಂದಿದೆ. ಅವರು ಸಮಾಜಮುಖಿ ಕಾರ್ಯಗಳಿಗೂ ಕೈಜೋಡಿಸಿದ್ದಾರೆ. ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ, ಕನ್ನಡ ಭಾಷೆ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿದ್ದರು. ಡಾ. ರಾಜ್ ಕುಮಾರ್ ಅವರ ಬದುಕು ಸಾಧನೆ, ಭಾಷಾಭಿಮಾನ ಸೇರಿದಂತೆ ಅವರ ವ್ಯಕ್ತಿತ್ವ ಎಲ್ಲಾ ವಯೋಮಾನದವರಿಗೂ ಸ್ಪೂರ್ತಿಯಾಗಿದೆ ಎಂದರು.
ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭವ್ಯಾ ನಾಗರಾಜ್ ಉಪನ್ಯಾಸ ನೀಡಿ ಮಾತನಾಡುತ್ತಾ, ಆಡುಮುಟ್ಟದ ಸೊಪ್ಪಿಲ್ಲ, ಡಾ. ರಾಜ್ ಕುಮಾರ್ ನಿರ್ವಹಿಸದ ಪಾತ್ರಗಳಿಲ್ಲ. ಎಂಬಂತೆ ನಟನೆ, ಗಾಯನ, ಚಿತ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ಕನ್ನಡಚಿತ್ರರಂಗವನ್ನು ಉತ್ತುಂಗ ಶಿಖರಕ್ಕೆ ಏರಿಸಿದ ಖ್ಯಾತಿ ಮೇರುನಟ ಡಾ. ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ತಂದೆಯ ಪ್ರಭಾವ ಡಾ. ರಾಜ್ ಕುಮಾರ್ ಅವರ ಮೇಲೆ ಅಗಾಧ ಪರಿಣಾಮ ಬೀರಿತ್ತು. ಮನೆಯಲ್ಲಿ ಬಡತನ ಇದ್ದಿದ್ದರಿಂದ ನಾಲ್ಕನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಅವರು, ನಾಟಕಮಂಡಳಿಯನ್ನು ಸೇರಿಕೊಳ್ಳುತ್ತಾರೆ. 1942 ರಲ್ಲಿ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಬಾಲನಟನಾಗಿ ಚಿತ್ರೋದ್ಯಮಕ್ಕೆ ಪ್ರವೇಶ ಮಾಡುವುದರೊಂದಿಗೆ ಎಲ್ಲಾ ಹಿರಿಯ ನಟಿಯರೊಂದಿಗೂ ನಾಯಕ ನಟನಾಗಿ ತೆರೆ ಹಂಚಿಕೊಂಡಿದ್ದಾರೆ ಎಂದರು.
ಡಾ. ರಾಜ್ ಕುಮಾರ್ ಅವರನ್ನು ಸಾಂಸ್ಕೃತಿಕ ನಾಯಕರೆಂದೇ ಕರೆಯಲಾಗುತ್ತದೆ. 1930-40 ರಲ್ಲಿ ಕನ್ನಡ ಭಾಷೆಯ ಚಿತ್ರಗಳನ್ನು ಹೊರತುಪಡಿಸಿ, ಬೇರೆ ಬಾಷೆಯ ಚಿತ್ರಗಳೇ ಹೆಚ್ಚು ಬಿಡುಗಡೆಯಾಗುತ್ತಿದ್ದ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಜೀವ ಕಳೆಯನ್ನು ತುಂಬಿದವರು ಡಾ. ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಹಾಗೂ ಉದಯ್ ಕುಮಾರ್ ಅವರು. ಕನ್ನಡ ಭಾಷೆ, ನುಡಿಗೆ ಅವರ ನೀಡಿದ ಪಾಮುಖ್ಯತೆ ಸಿನಿಮಾ ಮಾಧ್ಯಮ ಮೂಲಕ ಜನರನ್ನು ತಲುಪಿತು ಎಂದರು.
ಡಾ. ರಾಜ್ ಕುಮಾರ್ ಅವರ ಕಥಾವಸ್ತುವಿನ ಆಯ್ಕೆ ವಿಭಿನ್ನವಾದುದು. ಅದು ಜನಸಾಮಾನ್ಯರ ಮೇಲೆ ಪರಿಣಾಮಬೀರುವಂತದ್ದಾಗಿತ್ತು. ಜನಪದ, ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ನಿರಾಳವಾಗಿ ಅಭಿನಯಿಸುತ್ತಿದ್ದರು. ಸಮಾಕಾಲೀನ ವಿಷಯಗಳಿಗೆ ತಕ್ಕಂತೆ ಸಿನಿಮಾದಲ್ಲಿ ನಟಿಸುವುದರೊಂದಿಗೆ ಸಿನಿಪ್ರಿಯರು ಅವರನ್ನು ಮಾದರಿ ವ್ಯಕ್ತಿಯಾಗಿ ನೋಡುತ್ತಿದ್ದರು ಎಂದ ಅವರು, ಧರ್ಮಾರ್ಥವಾಗಿ, ಸಹಾಯಾರ್ಥವಾಗಿ ಅನೇಕ ರಸಮಂಜರಿ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ ಎಂದರು.
ಪ್ರೌಢಶಾಲೆ ಹಂತದವರೆಗೆ ಕನ್ನಡ ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಬೇಕು ಎಂಬ ವಿ.ಕೃ ಗೋಕಾಕ್ ವರದಿಯ ಜಾರಿಗೆ ಸರ್ಕಾರ ಹಿಂದೇಟು ಹಾಕಿದಾಗ, ಅಂತಹ ಸಂದರ್ಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಡಾ ರಾಜ್ ಕುಮಾರ್, ಚಿತ್ರೋದ್ಯಮ, ಜನಸಾಮಾನ್ಯರನ್ನು ಚಳುವಳಿಯಲ್ಲಿ ಒಟ್ಟುಗೂಡಿಸುವ ಮೂಲಕ ಸಮುದಾಯದ ನಾಯಕರಾದರು. ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದ ಇವರು, ವಿನಯವಂತರೂ, ಸದ್ಗುಣಿಗಳೂ ಆಗಿದ್ದರು. ತಮ್ಮ 78 ನೇ ವಯಸ್ಸಿನಲ್ಲಿ ತೀರಿಕೊಂಡರೂ ಸಹ ಇಂದಿಗೂ ತಮ್ಮ ನಟನೆಯ ಮೂಲಕ ಪ್ರತಿಯೊಬ್ಬ ಸಿನಿಪ್ರಿಯರಲ್ಲೂ ಜೀವಂತರಾಗಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲ ಶ್ರೀಧರ ಪ್ರಸಾದ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ರಾಜ್ ಕುಮಾರ್ ಅವರ ಬಗ್ಗೆ ಗೊತ್ತಿಲ್ಲದ ಮನುಜರಿಲ್ಲ. ಪ್ರತಿಯೊಬ್ಬ ಕನ್ನಡನಾಡಿನ ಮನೆ ಮನಗಳಲ್ಲಿ ಅಜರಾರಮರಾಗಿದ್ದಾರೆ. ಅವರು ನಡೆದು ಬಂದ ಹಾದಿ, ಅವರ ಸವಿವರಗಳನ್ನು ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಪ್ರತೀ ವರ್ಷ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದ ಅವರು, ಅವರ ಸಿನಿಮಾಗಳು ಅರ್ಥಪೂರ್ಣವಾಗಿರುತ್ತಿದ್ದವು ಜೊತೆಗೆ ಮನೆಮಂದಿಯೆಲ್ಲಾ ಕುಳಿತು ಅವರ ಚಿತ್ರಗಳನ್ನು ವೀಕ್ಷಿಸುತ್ತಿದ್ದರು ಎಂದರು.
ಭಾಗ್ಯಲಕ್ಷಿ್ಮೀ ಉಪ್ಪೂರು ಹಾಗೂ ರೋಹಿತ್ ಮಲ್ಪೆ ಇವರಿಂದ ಡಾ. ರಾಜ್ಕುಮಾರ್ ಗೀತ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕ ವೃಂದದವರು, ವಿದ್ಯಾರ್ಥಿನಿಯರು, ವಾರ್ತಾ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಗಳಾದ ದಿಯಾ, ದಿಶಾ ಹಾಗೂ ಶ್ರೀಪದ ನಾಡಗೀತೆ ಹಾಡಿದರು, ಕಾಲೇಜಿನ ಪ್ರೊ. ಡಾ. ರಾಜೇಂದ್ರ ಕೆ ನಿರೂಪಿಸಿದರೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಕಲಾನಿಕಾಯ ಡೀನ್ ಪ್ರೊ. ನಿಕೇತನ ವಂದಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Good Friday 2025 | St. Theresa Church, Kemmannu

Way of Cross | St. Theresa Church, Kemmannu

Maundy Thursday | St. Theresa Church, Kemmannu

Palm Sunday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Gregory D’Souza (79 years) | LIVE from Kemmannu

Final Journey of Bernard G D’Souza | LIVE from Moodubelle

Final Journey of Jacintha Serrao (66 years) | LIVE From Sasthan

Earth Angels Kemmannu Unite: Supporting Asha Fernandes on Women’s Day

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ

Final Journey of Joseph Peter Fernandes (64 years) | LIVE From Milagres, Kallianpur, Udupi

ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್

Final Journey of Leo J. Crasto (97 years) | LIVE from Kemmannu, Udupi

Final Journey of Fedrick Lewis (67 years) | LIVE from Santhekatte

Final Journey of Mr. Charles D’Souza (63 years) | LIVE from Udyavar

Final Journey Of Richard Sequeira | Live From Barkur || Kemmannu channel

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

0:24 / 2:30:40 NEW YEAR MASS 2025 | LIVE from Kemmannu | Diocese of Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..

Monti Phest: A Rich Heritage of South Canara - By Fr. Anush D’Cunha SJ
